ಶ್ರೀ ಗುರುವರನ ಕರುಣವ ಪಡೆಯುತ

ಶ್ರೀ ಗುರುವರನ ಕರುಣವ ಪಡೆಯುತ
ಬೇಗದಿರಾಗರಚನೆಯಿಂದ ಕೊಂಡಾಡಿ
ಭೋಗಿಭೂಷಣನನ್ನು ಭಕ್ತಿಯಿಂ ವೂಜಿಸಿ ಸಾಗಿಸು ಸಂಸಾರವಾ || ಪ ||

ಸಂಸಾರದಿಂ ಸುವಿಚಾರ ಮಾರ್ಗವ ತಿಳಿದು
ಸಂಸಾರಶರಧಿಯ ನೀ ದಾಂಟು || ಆ, ಪ. ||

ನೋಡು ಕಲಿಯುಗದ್ಯೆದು ಸಾವಿರ ವಷ೯ಕ್ಕೆ
ಕೇಡೊದಗುವದು ವಿಕಾರಿಗೆ
ನಾಡೆಲ್ಲ ಕೈಗೂಡಿ ನರರಿಗೆ ಪ್ರಳಯವು
ಕಾಡು ಸೇರಿದರೂ ಬಿಡದಣ್ಣಾ || ೧ ||

ಉತ್ತರದಿಕ್ಕಿನೊಳ್ಹುಟ್ಟುವದದು ರೋಗ
ಅಷ್ಟದಿಕ್ಕನೆ ಸುತ್ತಿಕೊಳ್ಳುವದು
ಅತ್ಯಧಿಕ ಇಂಗ್ಲೀಷ ಸರಕಾರ ದೊರೆಗಳಾ
ಗೊತ್ತುಮಾಡುವರು ಪ್ಲೇಗುಯೆಂತೆಂದು ||೨||

ರೋಗದ ಸೂಚನೆ ಮೊದಲು ಇಲಿಗೆ ತಗಲಿ
ಮ್ಯಾಗಿಂದ ಮನೆಯೊಳು ಬಿದ್ದಿಳಿಯೆ
ಆಗ ಜನರಿಗಂಟಿ ಗಾಭರಿಗೊಳ್ಳುತ
ಹ್ಯಾಗೆಮಾಡಲಿ ದೇವಾಯೆನ್ನವರು ||೩||

ಜಗಪತಿ ಪ್ರಜಕೆಲ್ಲಕಪ್ಪಣೆ ಇತ್ತನು
ತಗಲಬಾರದು ರೋಗ ಒಬ್ಬರಿಗೆ
ಅಗಲಿಸಿ ಊರಬಿಡಿಸಿ ಹೊರಗ್ಹಾಕಿಸಿ
ಮಿಗಿಲಾದ ಕ್ವಾರಂಟು ಕಟ್ಟಿಸುವಾ ||೪||

ಹೊಲಮನಿ ದ್ರವ್ಯದ ಬಲು ಚಿಂತಿಯಿ೦ ಬಿಟ್ಟು
ಹಲಬುತಡವಿಯೊಳು ಗುಡಿಸಲದಿ
ಇಳೆ ಜನರಿರುತಿತೆ ಕಳತಸ್ಕರರು
ಕಲ್ಲು ಕವಣಿಯೊಳಿಟ್ಟಿಟ್ಟು ಹೊಡೆಯುವರು ||೫||

ಒಬ್ಬರೊಬ್ಬರ ಬದಕಂ ಒಬ್ಬರೊಬ್ಬರಿಗಾಗಿ
ಒಬ್ಬರೊಬ್ಬರ ಮುಟ್ಟದಾಗುವದು
ಸರ್ವದೇಶದೊಳು ಪರಿ ಪರಿ ಕಷ್ಟ-.
ಗಳ್ಹಬ್ಬುತಿಹವು ದಿಟ ತಿಳಿ ಮನವೆ ||೬||

ಯಾಕೆ ಈ ಪರಿ ಕಷ್ಟ ನರರಿಗಾವುವದನೆ
ಕಾಕುಜನದಪಾಪ ಹೆಚ್ಚುತಿರೆ
ಲೋಕನಾಥನು ಭೂಮಿಗ್ಯಾಕೆ ಭಾರವು ಎಂದು
ತಾ ಕಳುಹಿದ ಮೃತ್ಯುದೇವತೆಯ ||೭||

ಗುರುಹಿರಿಯರನೆಲ್ಲ ಜರಿಯುತ ಜ್ಞಾನದಿ
ಪರದ್ರವ್ಯ ಪರಸ್ತ್ರೀಯ ಕದ್ದೊಯುತಾ
ಸರಿ ನಮಗಾರೆಂದು ದುರುಳರು ಗವ೯ದಿ
ಮೆರದಾಡುತಿರುವರು ಲೋಕದಲಿ ||೮||

ಹೇಳಲು ಬಹಳುಂಟು ಸೂಕ್ಷ್ಮದಿ ತಿಳಿಸುವೆ
ತಾಳೆಳು ಭೂಕಾಂತೆ ಬಹುಭಾರವಾ
ತಾಳಿದ ಶೇಷನು ಸೀರಖಾನಿ ನಿಂತನು
ಹಾಳುದೇಗುಲ ಹೊಕ್ಕ ಶಿವ ತಾನು ||೯||

ಈ ತೆರ ದುಜ೯ನ ಪ್ರಾಂತದಿಂದಲಿ ಬಹು-
ಪಾತಕ ಹೆಚ್ಚಿತು ಕಲಿಯೊಳಗೆ
ತಾತಗುರುಗೋವಿಂದನನು ಮೊರೆಹೊಕ್ಕರೆ
ಆತನೆ ರಕ್ಷಿಪ ಕರುಣದಲಿ || ೧೦ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂದಿತು ಬರಬಹುದು
Next post ವ್ಯರ್ಥ ಆಲಾಪ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys